Monday, November 29, 2010

"ಮೋಸಗಾರ ನನ್ನ ಹುಡುಗ"

ಮೋಸಗಾರ ನನ್ನ ಹುಡುಗ ಮೋಸಗಾರ 
ತಿಳಿಯಾದ ನನ್ನ ಮನಸ ಕಲಕಿ ಹೋದ 
ಮನಸಲ್ಲಿ ಆಸೆಯ ಚಿಗುರಿಸಿ 
ಚಿವುಟಿ ಮರೆಯಾದ
ಮನದಲ್ಲಿ ಮನೆಮಾಡಿ 
ಮರೆಮಾಚಿ ಮರೆಯಾದ 
ಮುಗ್ದ ಮನಕೆ ನೋವು ತಂದು 
ಹೃದಯದಗಾಯ ಮಾಡಿ ಹೋದ 
ಚುಚ್ಚಿ ಕೊಲ್ಲುವ ನೆನಪನ್ನ ಬಿಟ್ಟು 
ಕಾಣದಂತೆ ಮಾಯವಾದ
ಮೋಸಗಾರ ನನ್ನ ಹುಡುಗ 
ಬಲು  ಮೋಸಗಾರ  

                             - ವೀರೇಶ್ ಶಿವಣ್ಣ 

Sunday, November 28, 2010

"ಸ್ನೇಹದ ಪ್ರೀತಿ"

ಸ್ನೇಹಿತೆಯನ್ನು ಮಾಡಿದೆನು ಪ್ರೀತಿ
ಪ್ರತಿ ದಿನವು ಬೆಳೆಯಿತು ಅವಳ ನನ್ನ ಪ್ರೀತಿ
ಅವಳು ಇದ್ದಳು ಐಶ್ವರ್ಯ ರೈ ನ ರೀತಿ 
ಒಂದು ದಿನ ಹೇಳಿದೆ ನಿನ್ನ ಪ್ರೀತಿಸುವೆ 
ರೋಮಿಯೋ ಜೂಲಿಯಟ್ ನ ರೀತಿ 
ಕೆಪ್ಪಾಳಕ್ಕೆ ಕೊಟ್ಟಳು ಜಾಕಿಚಾನ್ ನ ರೀತಿ 
ಆಗ ತಿಳಿದೆ ಅವಳು ಮಾಡುತ್ತಿರುವುದು  "ಸ್ನೇಹದ ಪ್ರೀತಿ"

"ಆಸ್ತಿ ಪಾಸ್ತಿಯ ಪ್ರೀತಿ"

ಶ್ರೀ ಪತಿ ಗಿತ್ತು ಜೋರಾಗಿ ಆಸ್ತಿ ಪಾಸ್ತಿ 
ಅವನ ಪ್ರೀತಿಸಿದಳು ಒಬ್ಬಳು ಸುಮತಿ 
ಕೆಡಿಸಿದಳು ಅವನ ಮತಿ (ಬುದ್ದಿ )
ಬಿಟ್ಟು ಬಂದನು ಅವನು ಕಾರು ಬಂಗಲೆಯ ಆಸ್ತಿ 
ಅವನೆಂದನು ಅವಳಿಗೆ ಇನ್ನು ನೀನೆ ಗತಿ 
ಅವಳು ಅವನನ್ನು ಬಿಟ್ಟು ಹೋದಳು ಇನ್ನೊಬ್ಬನ ಜೊತಿ.

"ಏಡ್ಸ್ ನ ಚಲಪತಿ"

ನಮ್ಮ  ಊರಲ್ಲಿ ಇದ್ದ ಒಬ್ಬ ಚಲಪತಿ 
ಹುಡುಗಿಯರೆಂದರೆ ಅವನಿಗೆ ಬಲು ಪ್ರೀತಿ 
ಬಂತು ಅವನಿಗೆ ಕಾಯಿಲೆಯ ಭೀತಿ 
ಕಾಣಿಸಿಕೊಂಡಿತು ಅವನಿಗೆ ಏಡ್ಸ್ ನ ರೀತಿ
ಶುರುವಾಯಿತು ಅವನಿಗೆ ಭೇದಿ ವಾಂತಿ 
ಕಾಲವಾದನು ಅವನು ಆರು ವರ್ಷದ ಮೊದಲ ರಾತ್ರಿ 
ಇವತ್ತು ಅವನ ಮೊದಲನೇ ತಿಥಿ.

"ಸೂಟು ಬೂಟು ಕಾರಿದ್ರೆ" 

ನಮ್ಮ ಮಾವನ ಮಗಳು ಪ್ರೀತಿ 
ನಾನು ಪ್ರೀತಿಸಿದೆ ಅವಳನ್ನು ದಿನಂ ಪ್ರತಿ 
ನಾನಿಷ್ಟ ಪಟ್ಟೆ ಅವಳ ಪ್ರೀತಿ 
ಅವಳಿಗೆ ಸರಿಕಾಣಲಿಲ್ಲ ನನ್ನ ಬಡತನದ ರೀತಿ 
ಸರಿ ಹೊಂದಲಿಲ್ಲ ನನಗೆ ಅವಳ ಮನಸ್ಸಿನ ನೀತಿ 
ಮನೆಬಿಟ್ಟು ಹೋದಳು ರಾತ್ರಿಯೋ ರಾತ್ರಿ 
ಕಾರಿನ ಜೊತೆ ಬಂದಳು ಮಾರನೆ ರಾತ್ರಿ 
ಹಾಳು ಹೋಗಿದೆ ಅವಳ ಶೀಲದ ರೀತಿ ನೀತಿ.


"ಯೋಚಿಸ ಬಾರದೆ...?"

 ತಿರುಪತಿಗೆ  ಇದ್ದಳು ಒಬ್ಬಳೇ ಮಗಳು ಆರತಿ 
ಆರತಿ ಪ್ರೀತಿಸಿದ ಹುಡುಗ ಜಗಪತಿ 
ಮಗಳಿಗೆ ಮದುವೆ ಮಾಡಿದ ತಿರುಪತಿ 
ಮೊದಲ  ರಾತ್ರಿ ಕಳೆದ ಜಗಪತಿ
ಅವಳನ್ನು  ಬಿಟ್ಟು ಹೋದ ಮಾರನೆ ರಾತ್ರಿ 
ಆಮೇಲೆ  ಮಾಡಿದ ಸರಿಯಾದ ಮಂಗಳಾರತಿ 
ಆರತಿ ಯ ಸ್ಥಿತಿ ಈಗ ನಾಯಿಯ ರೀತಿ.


By :  ವೀರೇಶ್  ಶಿವಣ್ಣ

Saturday, November 20, 2010

"ಬೆಲೆ ಇಲ್ಲದ ಭಾಷೆಗಳು "

"ಬೆಲೆ ಇಲ್ಲದ ಭಾಷೆಗಳು " ಭಾಷೆಗೆ  ಬೆಲೆ ಎಲ್ಲಿ..?


ಪುರಾತನ  ಕಾಲದಲ್ಲಿ ಅಂದರೆ ತೆಥ್ರಾಯುಗ, ದ್ವಾಪರಯುಗ ಕಾಲಗಳಲ್ಲಿ ಭಾಷೆಗೆ ಅದರದೇ ಆದ ಪ್ರಾಮುಕ್ಯತೆ ಇತ್ತು.ಕೊಟ್ಟ ಭಾಷೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದ ಕಾಲವದು,  ತೆಥ್ರಾಯುಗ ಕಾಲದಲ್ಲಿ ಶ್ರೀ ರಾಮದೇವರ ತಂದೆ ದಶರಥ  ಮಹಾರಾಜ ರು ಕೈಕೆಗೆ ಕೊಟ್ಟ ಭಾಷೆಯಂತೆ ಶ್ರೀ ರಾಮನು ಕಾಡಿಗೆ ಹೋಗ ಬೇಕಾಯಿತು, ಹಾಗು ದ್ವಾಪರಯುಗ ಕಾಲದಲ್ಲಿ ಭೀಮನು ಕೇವಲ ಸಾಮಂತ ರಾಜನಿಗೆ ಕೊಟ್ಟ ಭಾಷೆಯಂತೆ ಒಂದು  ಕುದುರೆಯ ಸಲುವಾಗಿ ಭೀಮ ನು ತನ್ನ ಗುರುವಾದ ಕೃಷ್ಣ  ಬಲರಾಮ ರ  ಜೊತೆ ಯುದ್ದ ಮಾಡಬೇಕಾಯಿತು  ಆದರೆ ಈ ಕಲಿಯುಗದಲ್ಲಿ ಭಾಷೆಗೆ ಬೆಲೆನೇ ಇಲ್ಲದಂತಾಗಿದೆ, ಕೊಟ್ಟ ಭಾಷೆಗೆ ನಡೆದುಕೊಳ್ಳುವವರು ತುಂಬಾ ವಿರಳ, ಇದ್ದರು ಅಂತ ವ್ಯಕ್ತಿಗಳು  ಅಪರೂಪದ ವ್ಯಕ್ತಿಗಳು,  ಪ್ರೀತಿ ಮಾಡಿದ  ಹುಡುಗಿ ತನ್ನ ಪ್ರಿಯ ಹುಡುಗನ ಹತ್ತಿರ ಭಾಷೆ ತೆಗೆದುಕೊಳ್ಳುವುದು ಸಾಮಾನ್ಯ ಅದರಂತೆಯೇ ಹುಡುಗನಿಗೂ ಸಹ ಅವಳು ಭಾಷೆಯನ್ನು ಇಟ್ಟಿರುತ್ತಾಳೆ. ಆದರೆ ಆ ಹುಡುಗಿ ಕೊಟ್ಟ ಭಾಷೆಗೆ ಬೆಲೆನೇ ಇಲ್ಲ ಅದು ತಿಳಿಯುವುದು ಅವಳು ಅವನನ್ನ ಬಿಟ್ಟು ದೂರವಾದ  ಬಳಿಕ ಮಾತ್ರ ..


ಯಾವುದೊ ಯಾವುದೊ ಹೆಸರಿನಲ್ಲಿ ಆ ಸಮಯಕ್ಕೆ ತಕ್ಕಂತೆ  ಭಾಷೆಯನ್ನ ಸ್ವಲ್ಪವು ಯೋಚಿಸದೆ ನೀಡುತ್ತಾರೆ ಆದರೆ ಆ ಭಾಷೆಯ ಬೆಲೆ ಅವರಿಗೆ ತಿಳಿಯುವುದೇ ಇಲ್ಲ, ಭಾಷೆಗೆ ಅದರದೇ ಆದ ನಂಬಿಕೆ ಇದೆ, ಸ್ಥಾನ  ಮಾನವಿದೆ ಹಿರಿಯರು ಹಿಂದೆ ಭಾಷೆಗೆ ತುಂಬಾ ಪ್ರಾಮುಕ್ಯತೆಯನ್ನು ಕೊಡುತ್ತಿದ್ದರು. ಕೊಟ್ಟ ಮಾತಿಗೆ ಎಂದು ತಪ್ಪುತ್ತಿರಲಿಲ್ಲ, ಆದರೆ ಈಗ ಕಾಲ ಬದಲಾಗಿದೆ ಆಡಿದ ಮಾತುಗಳು ಮಾತಾಗಿ ಉಳಿಯುವುದಿಲ್ಲ, ಆಡಿದ ಮಾತೇ ಒಂದು ಮಾಡುವುದೇ ಒಂದು.. ಕಾಲ ಬದಲಾದಂತೆ ಮನುಷ್ಯರು  ಬದಲಾಗುತ್ತಾರೆ,  ಏನೇ ಆದರು ಸತ್ಯ ಎಂಬುದು ಮಾತ್ರ ಎಂದು ಸುಳ್ಳು ಆಗುವುದಿಲ್ಲ. 

ಪ್ರತಿಯೊಬ್ಬ ಮನುಷ್ಯನಲ್ಲಿ ದೇವ ಕೃಪೆ ಅನ್ನೋದು ಇರುತ್ತೆ ಹಾಗೆಯೇ ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಪ್ರೇಮ ವಾತ್ಸಲ್ಯ ಮಮತೆ ನಂಬಿಕೆ ತುಂಬಾ ಮುಖ್ಯ.  ಏನೇ ತಪ್ಪಾದರೂ ಅದನ್ನು ನನ್ನದು ತಪ್ಪಿಲ್ಲ ಅಂತ ಸಾಭೀತು ಮಾಡಬಹುದು ಆದರೆ ದೇವರು ಅಂತ ಒಬ್ಬ ಮೇಲೆ ಎಲ್ಲಾ ಆಟ ನೋಡ್ತಾ ಇರ್ತಾನೆ ಅನ್ನೋದನ್ನ ಮರಯೋ ಹಾಗಿಲ್ಲ. ಏನೇ ಇದ್ರೂ ಇತ್ತೀಚಿಗೆ ಭಾಷೆಗೆ ಬೆಲೆ ಇಲ್ಲದಿರುವುದು ತುಂಬಾ ವಿಪರ್ಯಾಸದ ಸಂಗತಿ..

ಎಲ್ಲಾ ಜನರು ಕೊಟ್ಟ ಭಾಷೆಗೆ ಮತ್ತು ಆಡಿದ ಮಾತಿಗೆ ನಡೆದುಕೊಂಡರೆ ಏನೆಲ್ಲ ನಡೆಯಬಹುದು ಅಂತ ಯೋಚನೆ ಮಾಡಿ...


ಇಂತಿ,


ವೀರೇಶ್  ಶಿವಣ್ಣ

Thursday, November 18, 2010

"ಮೋಸಗಾತಿ ನನ್ನ ಹುಡುಗಿ "

     ಯಾರಿಗೆ ಯಾರು ಮೋಸ ಮಾಡ್ತಾರೆ ಅಂತ ಹೇಳೋಕೆ ಆಗಲ್ಲ..ಈ ಪ್ರೀತಿ ಅಂದ್ರೆ ಯಾರಿಗೆ ಯಾವಾಗ ಮೋಸ ಮಾಡುತ್ತೆ ಅಂತ ಹೇಳೋಕೂ  ಆಗಲ್ಲ, ಪ್ರತಿ ಹುಡುಗರ ಮಾನಸಲ್ಲಿ ಅವನದೇ ಆದ ಆಸೆಗಳು ಇರುತ್ತೆ ನಾನು ಪ್ರೀತಿ ಮಾಡಬೇಕು ನನಗು ಒಬ್ಬಳು ಗೆಳತಿ ಬೇಕು ಅಂತ ಆದರೆ ಪ್ರೇಮಿಸಿದ ಬಳಿಕ ಗೊತ್ತಾಗುತ್ತೆ ಪ್ರೀತಿಯಲ್ಲಿ ಏನು ಸಿಗುತ್ತೆ ಪ್ರತಿಫಲ ಅಂತ..ಪ್ರೀತಿ ಅಂದ್ರೆ ಹಾಗೆ ಹೀಗೆ ಅಂತ ತುಂಬಾ ಆಸೆಗಳನ್ನ ಇಟ್ಟುಕೊಂಡು ಪಾಪ ಪ್ರೀತಿ ನ ಮಾಡ್ತಾನೆ ಆದರೆ ಕೊನೆಗೆ ಸಿಗುವುದು ಶೂನ್ಯ...
ಯಾಕೆ ಈ ಹುಡುಗಿಯರು ಮುಗ್ದ ಹುಡುಗರ ಮನವನ್ನ ಕಲಕುತ್ತಾರೆ, ಯಾಕೆ ಪ್ರೀತಿ ಅಂತ ಬಾವಿಗೆ ಬೀಳಿಸಿ ಅವರ ಭವಿಷ್ಯವನ್ನ ಹಾಳುಮಡ್ತಾರೆ ಪಾಪ ಏನೋ ಏನೋ ಆಸೆ ಇಟ್ಕೊಂಡು ಪ್ರತಿ ಹುಡುಗರು ತನ್ನ ಮನದಲ್ಲಿ ಅವರ ಅವರ ಹುಡುಗಿಯನ್ನು ದೇವತೆ ಯನ್ನಾಗಿ ಆರಾಧಿಸುತ್ತಾರೆ ಆದರೆ ಹುಡುಗಿಯರು ಅವರ ವರ್ತನೆಗಳಿಂದ ಹುಡುಗರ ಪಾಲಿಗೆ ಯಮನ ರೂಪ ದಲ್ಲಿ ಅವತಾರವನ್ನ ತಾಳಿ ಬರ್ತಾರೆ..
 ಪ್ರೀತಿ ಮಾಡಬೇಕು ಮಾಡಬಾರದು ಅಂತ ಆಜ್ಞೆ ಏನು ಇಲ್ಲ ಆದರೆ ಪ್ರೀತಿಸಿದವನ  ಕೈ ಯನ್ನು ಎಂದು ಬಿಡಬಾರದು, ಎಲ್ಲಾ ಹುಡುಗಿಯರ ಬಗ್ಗೆ ಹೇಳ್ತಾ ಇಲ್ಲ ನಂಬಿಸಿ ಮೋಸ ಮಾಡುವವರ ಬಗ್ಗೆ ಮಾತ್ರ...ಪ್ರತಿಯೊಬ್ಬ ಹುಡುಗಿಯರು ಈ ರೀತಿ ಮಾಡ್ತಾರೆ ಅಂತ ಹೇಳ್ತಾ ಇಲ್ಲ ಮನಸಲ್ಲಿ ಬೇರೆ ಹೊರಗಡೆ ಬೇರೆ ಬುದ್ದಿಯನ್ನ ಇಟ್ಟು ಮೋಸ ಮಾಡುವವರ ಬಗ್ಗೆ ತುಂಬಾ ಹೇಳಬೇಕಾಗುತ್ತೆ..
ಹುಡುಗ ತನ್ನ ಪ್ರೀತಿಯ ಬಲೆಯಲ್ಲಿ ಬಿದ್ದ ಬಳಿಕ ಅವನು ತನ್ನ ಸ್ನೇಹಿತರನ್ನು ಸಹ ದೂರ ಮಾಡಿ ಕೊಳ್ಳುತ್ತಾನೆ, ಅವನಿಗೆ ಯಾವುದೇ ಅವಕಾಶ ಸಿಕ್ಕರೂ ಅದನ್ನ ಉಪಯೋಗಿಸಿ ಕೊಳ್ಳುವುದೇ ಇಲ್ಲ್ಲ,ನನಗೆಲ್ಲ ಅವಳೇ ಬಂಧು ಬಳಗ ಅಂತ ಸ್ನೇಹಿತರಿಂದ ದೂರ ಸರಿಯುತ್ತಾನೆ,ಅವಳನ್ನ ಗಾಡವಾಗಿ ಪ್ರೀತಿಸುತ್ತಾನೆ, ಪಾಪ ಅವನಿಗೆ ಆಗುವ ಮುಂದಿನ ಪರಿಣಾಮದ ಬಗ್ಗೆ ಅವನಿಗೆ ಅರಿವೇ ಇರುವುದಿಲ್ಲ,ಹುಡುಗಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಆತನನ್ನ ಉಪಯೋಗಿಸಿ ಕೊಳ್ಳುತ್ತಾಳೆ.ಮೊದಲು ಕಾಇನ್ ಬಾಕ್ಸ್ ಇಂದ ಫೋನ್ ಮಾಡ್ತಾ ಇದ್ದ ಹುಡುಗಿ ಅದನ್ನ ಬಿಟ್ಟು ನಾನು ನಿನ್ನ ಜೊತೆ ಸರಿಯಾಗಿ ಮಾತಾಡೋಕೆ ಆಗ್ತಾ ಇಲ್ಲ ಏನಾದ್ರು ಮಾಡಿ ನನಗೆ ಮೊಬೈಲ್ ಕೊಡ್ಸು ಅಂತ ಕೇಳಿ  ಕೊಳ್ಳುತ್ತಾಳೆ, ಮೊಬೈಲ್ ಬಂದ ಬಳಿಕ ಶುರುವಾಗುವುದೇ ಬೇರೆ ಆಟ...ದಿನ ಮೊಬೈಲ್ ಗೆ ಕರೆನ್ಸಿ ಹಾಕ್ಸು ಅಂತಾರೆ ನಾವು ಹಾಕಿಸಿದ ದುಡ್ಡಿಂದ ಬೇರೆ ಹುಡುಗರನ್ನ maintain ಮಾಡ್ತಾರೆ, 
ಇಲ್ಲಿಂದ ಪ್ರತಿ ನಿತ್ಯ ಮೊಬೈಲ್ ಗೆ ಬಿಡುವೆ ಇರುವುದಿಲ್ಲ ರಾತ್ರಿ ಎಲ್ಲಾ ಚಿನ್ನು ಬಂಗಾರ ಅಂತ ಮಾತನಾಡುತ್ತ ಸಮಯ ಕಳೆಯುವುದೇ ಅವರಿಗೆ ಗೊತ್ತಾಗುವುದೇ ಇಲ್ಲ, ಆಗ ಅವರು ಸಮಯ ನೋಡಿದರೆ ಸರಿ ಸುಮಾರು ೫ ಗಂಟೆ ಜಾವ ಆಗಿರುತ್ತೆ. ಈ ಹುಡುಗಿಯು ಮಾತನಾಡುವಾಗ ಅವರ  ಮುಂದೆ ಆಗುವ ಮಗುವಿಗೂ ನಾಮಕರಣವನ್ನ ಆ ರಾತ್ರಿನೇ ಇಟ್ಟಿರುತ್ತಾರೆ, ಅವರದೇ ಆದ ಲೋಕದಲ್ಲಿ ತೇಲಾಡುತ್ತ ತುಂಬಾ ಸಂತೋಷ ದಿಂದ ಕಾಲವನ್ನು ಕಳೆಯುತ್ತಾರೆ,ಅವರು  ತಮ್ಮ ಮುಂದಿನ ಭವಿಷ್ಯದ ಕಡೆಗೆ ಸ್ವಲ್ಪ ಕೂಡ ಗಮನವನ್ನ ಹರಿಸುವುದಿಲ್ಲ. ಆದರೆ ಇಲ್ಲಿ ಬಲಿ ಪಶುವಾಗುವರು ತುಂಬಾ ಹುಡುಗರು ಹೆಚ್ಚು..  
ಮೊಬೈಲ್ ಬಂದ ಬಳಿಕ ಹುಡುಗಿಯರು ಬದಲಾಗುವುದು ಅವರ ಜಾಯಮಾನ ಅದು ಅವರ ಹುಟ್ಟುಗುಣ, ರಾತ್ರಿಯಲ್ಲ ಒಬ್ಬನ ಜೊತೆ ಮಾತಾಡಿಕೊಂಡು ಮತ್ತೆ ಮಾರನೆ ದಿನ ರಾತ್ರಿ ಇನ್ನೊಬ್ಬನ ಜೊತೆ ಮಾತಾಡುವುದು ಅವರು ನಡಿಸಿಕೊಂಡು ಬಂದಿರುವ ಪದ್ಧತಿ. ಅವರು ಎಷ್ಟು ಸಿಮ್ ಕಾರ್ಡ್ ಇಟ್ಟಿರ್ತಾರೆ ಅಂತ ಅವರಿಗೆ  ಗೊತ್ತು ಪಾಪ ಪ್ರೀತಿಗೆ ಬಿದ್ದ ಈ ಮುಗ್ದ ಹುಡುಗನಿಗೆ ಈ ವಿಷಯ ಅರ್ಥವಾಗುವುದಿಲ್ಲ. ಈತ ಯಾಕೆ ನೆನ್ನೆ ನನ್ನ ಹತ್ರ ಮಾತನಾಡಲಿಲ್ಲ ಅಂತ ಕೇಳಿದ್ರೆ ಈಕೆ ನಯವಾಗಿ ಜಾರುತ್ತಾಳೆ. ನಮ್ಮ ಅಮ್ಮ ನನ್ನ ಜೊತೆ ಮಲಗಿದರು ಅಂತ ಯಾವುದೊ ನೆಪ ಹೇಳಿ ಹುಡುಗನಿಗೆ ಸಂದೇಹ ಬರದಂತೆ ನಡೆದು ಕೊಳ್ಳುತ್ತಾಳೆ.
ಆ ಹುಡುಗ ಪ್ರತಿ ದಿನ ಅವಳನ್ನ ಹೆಚ್ಚಾಗಿ ಪ್ರೀತಿಸ  ತೊಡಗುತ್ತಾನೆ  ಆದರೆ ಅವಳು ಅವನ ಮನಸನ್ನ ಅರ್ಥನೇ ಮಾಡಿಕೊಳ್ಳುವುದೇ ಇಲ್ಲ.. ಸುಮ್ಮನೆ ಆಕರ್ಷಣೆಗೆ ಬಿದ್ದ ಈ ಹುಡುಗಿ ಮತ್ತೆ ಯಾರನ್ನೋ ನೋಡಿ ಅವರಿಗೆ ಫೋನ್ ಮಾಡ್ತಾ ಇರ್ತಾಳೆ.. ಆಗ ಮೊದಲು  ಪ್ರೀತಿಸಿದವನಿಂದ ದೂರ ಸರಿಯಲು ಕಾರಣಗಳನ್ನ ಹುಡುಕುತ್ತ  ಹೋಗ್ತಾಳೆ , ಅವರಿಗೆ ದೂರವಾಗಲು ಯಾವುದೊ ಸ್ವಲ್ಪ ನೆಪ ಸಾಕು. ಚಿಕ್ಕ ವಿಶಯವನ್ನು  ದೊಡ್ಡದಾಗಿ ಮಾಡಿಕೊಂಡು ಆ ಹುಡುಗನಿಂದ ದೂರ ದೂರ ಹೋಗುತ್ತಾಳೆ .. ಈ ರೀತಿ ಮಾಡಿದರೆ ಹುಡುಗನಿಗೆ ಏನು ಆಗಬೇಕು ಪ್ರೀತಿಗೆ ಬಿದ್ದ ಹುಡುಗನಿಗೆ ಸಿಕ್ಕಿದ ಪ್ರತಿ ಫಲ ಇದೇನಾ...?  ಈ  ಹುಡುಗ ಮುಂದೆ  ಏನು ಮಾಡಬೇಕು ಹೇಳಿ..?
ಈ ರೀತಿ ಪ್ರೀತಿ ಯಾಕೆ ಮಾಡಬೇಕು ಅಲ್ವಾ..ಹುಡುಗನಿಗೆ ಆಗುವ ನೋವು ಅವರಿಗೆ ಹೇಗೆ ಅರ್ಥ ಆಗಬೇಕು.. ಪ್ರೀತಿ ಮಾಡೋದು ಸುಲಭ ಆದರೆ ಅವಳು ಬಿಟ್ಟಾಗ ಬರುವ ವೇತನೆ ಯಾರಿಗೆ ಅರ್ಥ ಆಗುತ್ತೆ. ಅಷ್ಟರಲ್ಲಿ  ಏನೋ ಏನೋ ಕನಸನ್ನ ಕಾಣುತ್ತಿದ್ದ ಹುಡುಗ ಮಂಕಾಗಿ ಹೋಗುತ್ತಾನೆ. ಜೀವನ ಇಷ್ಟೇನಾ ಅಂತ ಸುಮ್ಮನೆ ಚಿಗುರಿದ ಆಸೆಗಳನ್ನು  ಚಿವುಟುತ್ತ ಅವನದೇ ಆದ ಲೋಕದಲ್ಲಿ ಬದುಕುತ್ತಾನೆ.  ಬುದ್ದಿ ಕಲಿತ ಹುಡುಗರು ಈ ಮೊಸಗಾರ್ತಿಯರಿಂದ ದೂರ ಇರುವುದು ಒಳಿತು.... 

ಇಂತಿ ನಿಮ್ಮ ಪ್ರೀತಿಯ...

ವೀರೇಶ್ ಶಿವಣ್ಣ